ಮಂಗಳೂರು, 24-04-2013


ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಲಯದ  ಅನುದಾನಿತ ಕಾಲೇಜುಗಳ ಎಪ್ರಿಲ್ ತಿಂಗಳ ವೇತನದ ಬಿಲ್ಲನ್ನು ಹೆಚ್‌ ಆರ್ ಎಂ ಎಸ್ ತಂತ್ರಾಂಶದ ಮೂಲಕವೇ ಖಜಾನೆಗೆ ಸಲ್ಲಿಸಲಾಗುವುದು  ಹಾಗೂ ಯಾವುದೇ ಪರಿಸ್ಥಿತಿಯಲ್ಲಿ ಮ್ಯಾನುವೆಲ್ ಆಗಿ ಮಾಡಲಾಗುವುದಿಲ್ಲ ಎಂಬುದಾಗಿ ಜಂಟಿ ನಿರ್ದೇಶಕರ ಸುತ್ತೋಲೆ (ಕಾಶಿಇ: ಪ್ರಾಕಮ:5: ಖಾಅಕಾಸಿ ಹೆಚ್‌ ಆರ್ ಎಂ ಎಸ್ 2009-10) ತಿಳಿಸುತ್ತದೆ. ಹಾಗಾಗಿ ಆಯಾ ಕಾಲೇಜುಗಳ ಶಿಬ್ಬಂದಿ ವಿವರಗಳನ್ನು ಈ ತಂತ್ರಾಂಶಕ್ಕೆ 31-3-2013 ರ ಒಳಗೆ update  ಮಾಡಬೇಕೆಂದು ಹೇಳಲಾಗಿದೆ. ಈ ಬಗ್ಗೆ ತೊಡಕುಗಳೇನಿದ್ದರೆ ಜಂಟಿ ನಿರ್ದೇಶಕರ ಕಛೇರಿಯ ಹೆಚ್‌ಎಂ ಆರ್ ಎಸ್ ಸಂಪನ್ಮೂಲ ಅಧಿಕ್ಷಕರಾದ  ಶ್ರೀಮತಿ ಸುಕನ್ಯ ಇವರನ್ನು ಸಂಪರ್ಕಿಸಬಹುದು ಎಂಬುದಾಗಿಯೂ ತಿಳಿಸಲಾಗಿದೆ.


ಆದರೆ ಇತ್ತೀಚಿನವರೆಗೆ ಕೆಲವು ಕಾಲೇಜುಗಳಲ್ಲಿ ಈ ಕಾರ್ಯವು ಇನ್ನೂ ಪೂರ್ಣವಾಗಿಲ್ಲ. ಹಾಗಾಗಿ ಈ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸುವ ದಿಕ್ಕಿನಲ್ಲಿ ಮುತುವರ್ಜಿ ವಹಿಸುವಂತೆ ಅಮುಕ್ತ್ ಸದಸ್ಯರುಗಳಿಗೆ ಎಸ್ ಎಮ್ ಎಸ್ ಗಳನ್ನು ಅಮುಕ್ತ್ ಅಧ್ಯಕ್ಷರು ಈಗಾಗಲೇಮಾಡಿದ್ದಾರೆ.


ಹೆಚ್‌ ಆರ್ ಎಂ ಎಸ್ ಕಾರ್ಯವನ್ನು ಪೂರ್ಣಗೊಳಿಸಿದ ಕಾಲೇಜುಗಳ  ಎಪ್ರಿಲ್ ತಿಂಗಳ ಶಿಬ್ಬಂದಿ ವೇತನವು ಮೇ ಮೊದಲ ವಾರದಲ್ಲಿ ಬಿಡುಗಡೆಯಾದರೆ ಉಳಿದವರ ವೇತನವು ಈ ಕಾರ್ಯವು ಮುಗಿದ ನಂತರವೇ ಆಗಬಹುದು ಎಂಬುದಾಗಿ ಜಂಟಿ ನಿರ್ದೇಶಕರು ತಿಳಿಸಿದ್ದಾರೆ



 

 

 

Comments powered by CComment

Copyright © 2013 amuct.org. All Rights Reserved | Powered by eCreators
Home | News | Sitemap | Contact

OFFICE:
AMUCT, I Floor, Nithyananda Complex,
A.S.R.P. Road,
Near Nava Bharath Circle,
Kodialbail, Mangalore- 575 003

 

E-Mail: This email address is being protected from spambots. You need JavaScript enabled to view it.
E-Mail: This email address is being protected from spambots. You need JavaScript enabled to view it.