ಏಜಾಜ್ ಅಶ್ರಫ್


ಮುಸ್ಲಿಂ ವಿಶ್ವವಿದ್ಯಾಲಯಗಳ ಬಗ್ಗೆ ತಪ್ಪಾಗಿ ಉಲ್ಲೇಖಿಸುವ ತಮ್ಮ ಪ್ರವೃತ್ತಿ ಕುರಿತು ಮರುಚಿಂತಿಸಲು ಭಾರತೀಯ ರಾಜಕಾರಣಿಗಳಿಗೆ ಇದು ಸಕಾಲ. ಐತಿಹಾಸಿಕ ಅಲಿಗಢ ಮುಸ್ಲಿಂ ವಿಶ್ವ ವಿದ್ಯಾಲಯಕ್ಕೂ (ಎಎಂಯು) ಕುಲಪತಿಗಳ ನೇಮಕದಲ್ಲಿ ಇತರ ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಅನ್ವಯಿಸುವ ನಿಯಮ ಗಳನ್ನೇ ಅನ್ವಯಿಸಬೇಕು. ಇದರಿಂದ, ನಿವೃತ್ತ ಲೆಫ್ಟಿನೆಂಟ್ ಜನರಲ್ ಒಬ್ಬರು ಎಎಂಯುನ ಮುಖ್ಯಸ್ಥರಾಗುವಂಥ ಅಸಂಬದ್ಧ ಸನ್ನಿವೇಶಗಳು ಸೃಷ್ಟಿಯಾಗುವುದು ತಪ್ಪುತ್ತದೆ.

ಹಾಲಿ ಕುಲಪತಿ ನಿವೃತ್ತ ಲೆ.ಜ ಝಮೀರುದ್ದೀನ್ ಶಾ ಅವರ ಅಧೀನದಲ್ಲಿ ಅಲಿಗಢ ಮುಸ್ಲಿಂ ವಿವಿ ಒಂದು ಮಿಲಿಟರಿ ಸಂಸ್ಥೆ ಯಂತೆ ಗೋಚರಿಸುತ್ತದೆ. ಅದರ ಸಹಕುಲಪತಿ ಒಬ್ಬ ನಿವೃತ್ತ ಬ್ರಿಗೇಡಿಯರ್; ರಿಜಿಸ್ಟ್ರಾರ್ ಒಬ್ಬ ಮಾಜಿ ಗ್ರೂಪ್ ಕ್ಯಾಪ್ಟನ್. ನಿಜಕ್ಕೂ, ವಿವಿಗಳಿಗೆ ಜನರಲ್‌ಗಳ ಪರಿಣತಿ ಅಗತ್ಯವೆಂದು ನಾವು ನಿರ್ಧರಿಸಿದ್ದು ಯಾವಾಗ? ಇನ್ನೊಂದು ತಥಾಕಥಿತ ಮುಸ್ಲಿಂ ವಿವಿ- ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಮೊದಲ ಜನರಲ್ ಕುಲಪತಿಯಾಗಿ 1996ರಲ್ಲಿ ನೇಮಕಗೊಂಡವರು, ಲೆ.ಜ (ನಿವೃತ್ತ) ಎಂ.ಎ ಝಾಕಿ. ಆದರೆ ಎಎಂಯು ಮತ್ತು ಜಾಮಿಯಾ ಮಿಲಿಯಾಗಳಿಗೆ ಶೈಕ್ಷಣಿಕೇತರ ವಿ.ಸಿಗಳಾಗಿದ್ದವರಲ್ಲಿ ಸೇನಾಧಿಕಾರಿಗಳು ಮಾತ್ರವಲ್ಲ, ಇತರರೂ ಇದ್ದಾರೆ. ಇಷ್ಟೇ ಪ್ರಾಮುಖ್ಯತೆಯ ಇತರ ಕೇಂದ್ರೀಯ ವಿವಿಗಳಿಗೆ ಹೋಲಿಸಿದರೆ, ಇದು ಅತ್ಯಂತ ವೈರುಧ್ಯ. ದಿಲ್ಲಿ ವಿವಿ (ಡಿಯು)ಯನ್ನೇ ತೆಗೆದು ಕೊಳ್ಳೋಣ, ಸ್ವಾತಂತ್ರ್ಯ ಬಂದಾಗಿನಿಂದ ಈವರೆಗೂ ಏಕೈಕ ನಾಗರಿಕ ಸೇವಾ ಅಧಿಕಾರಿ- ಸಿ.ಡಿ ದೇಶ್‌ಮುಖ್ ಅದರ ವಿ.ಸಿ ಆಗಿದ್ದರು. ಅದಕ್ಕೆ ಮುನ್ನ ಅವರು 1950- 56ರ ಅವಧಿಯಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದವರು. ವಿಶ್ವಭಾರತಿ ಕೇವಲ ಒಬ್ಬ ಶೈಕ್ಷಣಿಕೇತರ ವಿಸಿಯನ್ನು ಪಡೆದಿತ್ತು. ಅವರು, ಭಾರತದ 5ನೇ ಮುಖ್ಯ ನ್ಯಾಯಾಧೀಶರಾಗಿದ್ದ ಎಸ್.ಆರ್. ದಾಸ್. ಬನಾರಸ್ ಹಿಂದೂ ವಿವಿ (ಬಿಎಚ್‌ಯು)ಗೆ ಒಬ್ಬನೇ ಒಬ್ಬ ಐಎಎಸ್ ಅಧಿಕಾರಿ ಅಥವಾ ಜನರಲ್ ವಿಸಿ ಆಗಿ ನೇಮಕಗೊಂಡಿಲ್ಲ. ದಿಲ್ಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರೂ ಯೂನಿವರ್ಸಿಟಿಗೆ ಆರಂಭದಲ್ಲಿ ಇಬ್ಬರು ರಾಜತಾಂತ್ರಿಕರು- ಜಿ. ಪಾರ್ಥಸಾರಥಿ ಮತ್ತು ಮಾಜಿ ರಾಷ್ಟ್ರಪತಿ ಕೆ.ಆರ್. ನಾರಾ ಯಣನ್- ವಿ.ಸಿಗಳಾಗಿದ್ದರು. ಆದರೆ ಕಳೆದ 3 ದಶಕಗಳಲ್ಲಿ ಶೈಕ್ಷಣಿಕೇತರರು ಯಾರೂ ಕುಲಪತಿ ಗಳಾಗಿಲ್ಲ. ಪ್ರತ್ಯೇಕತಾವಾದಿ ಚಳವಳಿಗಳ ಪ್ರಾಂತ್ಯವೆಂದೇ ಕುಖ್ಯಾತಿ ಪಡೆದ ಪ್ರದೇಶದಲ್ಲಿರುವ ನಾರ್ತ್ ಈಸ್ಟರ್ನ್ ಹಿಲ್ ಯುನಿ ವರ್ಸಿಟಿಗೆ ಒಬ್ಬ ಜನರಲ್ ಕೂಡ ವಿ.ಸಿ ಆಗಿ ನೇಮಕಗೊಂಡಿಲ್ಲ.

ಹಾಗಿದ್ದರೆ, ಈ ಎರಡು ವಿವಿಗಳಿಗೆ ಮಾತ್ರ ಶೈಕ್ಷಣಿಕೇತರ ವಿಸಿಗಳನ್ನೇ ಹೇರಳವಾಗಿ ನೇಮಿಸುವ ಅವಶ್ಯಕತೆ ಏನಿತ್ತು? ಈ ಎರಡು ವಿವಿಗಳಿಗೆ, ಅದರಲ್ಲೂ ನಿರ್ದಿಷ್ಟವಾಗಿ ಎಎಂಯುಗೆ ಕುಲಪತಿ ನೇಮಿಸುವಾಗ ಭಾರತ ಸರಕಾರ ಎಸಗಿದಷ್ಟೇ ಲೋಪವನ್ನು ಮುಸ್ಲಿಂ ರಾಜಕೀಯ ಗಣ್ಯರು ತಮ್ಮ ಹಕ್ಕುಗಳನ್ನು ಚಲಾಯಿಸು ವಲ್ಲೂ ಎಸಗಿದ್ದಾರೆ. ಅವರನ್ನು ಓಲೈಸಲು ಮತ್ತು ಭಾರತದ ಜಾತ್ಯ ತೀತ ತತ್ತ್ವವನ್ನು ಎತ್ತಿ ಹಿಡಿಯಲು 1981ರಲ್ಲಿ ಅಲಿಗಢ ಮುಸ್ಲಿಂ ವಿವಿ ಕಾಯ್ದೆಗೆ ತಿದ್ದುಪಡಿ ತರಲಾಯಿತು. ಎಎಂಯು ಕುಲಪತಿ ನೇಮಕದಲ್ಲಿ ಹೊಸ ಪದ್ಧತಿ ಪರಿಚಯಿಸುವುದು ಇದರ ಉದ್ದೇಶ. ಅದುವರೆಗೆ ಎಎಂಯುಗೆ ಇತರ ಕೇಂದ್ರೀಯ ವಿವಿಗಳ ನಿಯಮ ವೇ ಅನ್ವಯವಾಗುತ್ತಿತ್ತು. ಮೂವರು ಸದಸ್ಯರ ಶೋಧನಾ ಸಮಿತಿ ಮೂವರು ಸಂಭಾವ್ಯರ ಹೆಸರನ್ನು ರಾಷ್ಟ್ರಪತಿಗಳಿಗೆ ಸಲ್ಲಿಸುತ್ತಿತ್ತು. ನಂತರ ರಾಷ್ಟ್ರಪತಿಗಳು ಕುಲಪತಿಯನ್ನು ಆರಿಸುತ್ತಿದ್ದರು.

ಪರಿಷ್ಕೃತ ಕಾಯ್ದೆಯಡಿ 27 ಸದಸ್ಯರ ಎಎಂಯು ಕಾರ್ಯನಿರ್ವಾಹಕ ಮಂಡಳಿಯು ಕುಲಪತಿ ಹುದ್ದೆಗೆ 5 ಮಂದಿ ಸಂಭಾವ್ಯ ರ ಪಟ್ಟಿ ಸಿದ್ಧಪಡಿಸುತ್ತದೆ. ಇದನ್ನು 183 ಸದಸ್ಯರ ವಿವಿ ಕೋರ್ಟಿಗೆ ಕಳುಹಿಸಲಾಗುತ್ತದೆ. ಅಲ್ಲಿ ಪ್ರತಿಯೊಬ್ಬ ಸದಸ್ಯನೂ ತಲಾ 3 ಮತ ಚಲಾಯಿಸುವ ಮೂಲಕ ಅಭ್ಯರ್ಥಿಗಳ ಪಟ್ಟಿಯನ್ನು ಮೂರಕ್ಕಿಳಿ ಸುತ್ತಾರೆ. ಈ ಮೂವರ ಪೈಕಿ ಅತಿ ಹೆಚ್ಚು ಮತ ಪಡೆದವರನ್ನು ಕುಲಪತಿಯನ್ನಾಗಿ ರಾಷ್ಟ್ರಪತಿಗಳು ನೇಮಿಸುತ್ತಾರೆ. ಸಂಸ್ಥೆಗೆ ಅಲ್ಪ ಸಂಖ್ಯಾತ ಸ್ಥಾನಮಾನಕ್ಕಾಗಿ ಆಗ್ರಹಿಸುವ ಮುಸ್ಲಿಂ ಸಮುದಾಯಕ್ಕೆ ನೇರವಾಗಿ ಉತ್ತರದಾಯಿಯಾಗಿರುವಂತೆ ಎಎಂಯು ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಆದರೂ ವಾಸ್ತವ ದಲ್ಲಿ ಎಎಂಯು ಮೇಲೆ ಸಮುದಾಯಕ್ಕೆ ನಿಯಂತ್ರಣವಿದೆ. ಹೇಗೆಂದರೆ, ಕುಲಪತಿಗಳನ್ನು ಚುನಾಯಿಸುವ ಪರಿಷತ್ತಿನಲ್ಲಿ 20 ಮಂದಿ ಹಳೆ ವಿದ್ಯಾರ್ಥಿಗಳ ಒಕ್ಕೂಟದ ಪ್ರತಿನಿಧಿಗಳು, 10 ಮಂದಿ ದಾನಿಗಳು, 10 ಮಂದಿ ನುರಿತ ವತ್ತಿಪರರು, ಉದ್ಯಮ ಮತ್ತು ವಾಣಿಜ್ಯದ ಪ್ರತಿನಿಧಿಗಳು, ಮುಸ್ಲಿಂ ಸಂಸ್ಕೃತಿ ಮತ್ತು ಅಧ್ಯಯನಕ್ಕೆ ಸಂಬಂಧಿಸಿದ 15 ಮಂದಿ, ಮುಸ್ಲಿಂ ವಕ್ಫ್ ಮಂಡಳಿಯ ನಾಲ್ವರು ಚೇರ‌್ಮನ್‌ಗಳು, 10 ಮಂದಿ ಸಂಸದರು ಸದಸ್ಯರಾಗಿರುತ್ತಾರೆ. ಹೀಗೆ ಎಎಂಯು ಶೈಕ್ಷಣಿಕ ತಜ್ಞರನ್ನು ಪರಿಣಾಮಕಾರಿ ಯಾಗಿ ಅಲ್ಪಸಂಖ್ಯಾತರನ್ನಾಗಿಸಲಾಗಿದೆ.

ಇದಕ್ಕೆ ಕಾರ್ಯನಿರ್ವಾಹಕ ಮಂಡಳಿಯೇ ಮೂಲ ಹೊಣೆ ಎಂದು ವಾದಿಸಬಹುದು. ಮಂಡಳಿ ಸಿದ್ಧಪಡಿಸುವ ಪಟ್ಟಿಯಿಂದ ವಿಸಿ ಹುದ್ದೆಗೆ ಐವರು ಅಭ್ಯರ್ಥಿಗಳನ್ನು ಆರಿಸುವುದಷ್ಟೇ ಕೋರ್ಟಿನ ಕೆಲಸ. ಆದ್ದರಿಂದ ಮಂಡಳಿಯು ಕೇವಲ ಶಿಕ್ಷಣ ವೇತ್ತರ ಹೆಸರುಗಳನ್ನಷ್ಟೇ ಕೋರ್ಟಿಗೆ ಕಳುಹಿಸಬಹುದು. ಆ ಮೂಲಕ ಶೈಕ್ಷಣಿಕೇತರರು ವಿಸಿ ಹುದ್ದೆಗೆ ಆಯ್ಕೆಯಾಗುವುದನ್ನು ತಡೆಯಬಹುದು. ಆದಾಗ್ಯೂ, 27 ಸದಸ್ಯರ ಮಂಡಳಿಯಲ್ಲಿ ಬಹುಪಾಲು ನಾಮ ನಿರ್ದೇಶಿತರೇ ಆಗಿದ್ದಾರೆ. ಮೂವರನ್ನು ರಾಷ್ಟ್ರಪತಿಗಳು, ಒಬ್ಬರನ್ನು ಮುಖ್ಯ ರೆಕ್ಟರ್ ಆಗಿರುವ ಉತ್ತರಪ್ರದೇಶದ ರಾಜ್ಯಪಾಲರು ನೇಮಿಸುತ್ತಾರೆ. ಕಳೆದ 3 ದಶಕಗಳಿಂದ ಬಹುತೇಕ ಶೈಕ್ಷಣಿಕೇತರರೇ ಇದ್ದ ವಿ.ಸಿ ಪಟ್ಟಿಗೆ ಸೇರ್ಪಡೆಯೆಂಬ ಂತೆ, ಅತ್ಯಂತ ಹಿರಿಯ ಮುಖ್ಯಾಧಿಕಾರಿಯಾಗಿರುವ ಸಹಾಯಕ ಉಪಕುಲಪತಿ ಮತ್ತು ವಿದ್ಯಾರ್ಥಿ ಮೇಲ್ವಿಚಾರಕರ ಹುದ್ದೆಗೆ ವಿಸಿ ಶಿಫಾರಸನ್ನು ಮಂಡಳಿ ಅನುಮೋದಿಸುತ್ತದೆ. ಹೆಚ್ಚುವರಿಯಾಗಿ, ಕೋರ್ಟ್ ತನ್ನ 6 ಮಂದಿ ಸದಸ್ಯರನ್ನು ಮಂಡಳಿಯಲ್ಲಿ ಪ್ರತಿನಿಧಿಸಲು ಕಳುಹಿಸುತ್ತದೆ. ಅವರಲ್ಲಿ ಯಾರೊಬ್ಬರೂ ಎಎಂಯು ಸಿಬ್ಬಂದಿಯಾಗಿರುವುದಿಲ್ಲ. ಮಂಡಳಿಯ ಒಬ್ಬ ಸದಸ್ಯರನ್ನೇ ಗೌರವ ಖಜಾಂಚಿಯಾಗಿ ಚುನಾಯಿಸಲಾಗುತ್ತದೆ. ಹೀಗೆ 27 ಸದಸ್ಯರ ಪೈಕಿ 15 ಮಂದಿ ಹಾಗೂ ವಿಸಿ ಕೂಡ ಶೈಕ್ಷಣಿಕೇತರರೇ ಆಗಿರುವುದರಿಂದ ಅವರೆಲ್ಲರೂ ಕೇಂದ್ರದ ತಾಳಕ್ಕೆ ಕುಣಿಯುವಲ್ಲಿ ವಿಸಿಯ ಬೆಂಬಲಕ್ಕೆ ನಿಲ್ಲುತ್ತಾರೆ.

ಇಲ್ಲಿ, ಶೈಕ್ಷಣಿಕ ವಲಯದ ವಿಸಿಗಳು ಶೈಕ್ಷಣಿಕ ಸುಧಾರಣೆ ಯತ್ತ ಒಲವು ಪ್ರದರ್ಶಿಸಿದ್ದಾರೆ. ತದ್ವಿರುದ್ಧವಾಗಿ, ಶೈಕ್ಷಣಿಕೇತರ ವಿಸಿಗಳು ಭೌತಿಕ ಮೂಲ ಸೌಕರ್ಯಗಳ ಅಭಿವದ್ಧಿಗೆ ಒಲವು ತೋರುತ್ತಾರೆ. ಉದಾಹರಣೆಗೆ, ಕುಲಪತಿ ಪ್ರೊ. ಮೊಹಮ್ಮದ್ ನಸೀಮ್ ಫಾರೂಕಿ, ಬಹಳ ವಿರೋಧಗಳನ್ನು ಎದುರಿಸಿಯೂ ಎಎಂಯುನಲ್ಲಿ ಕಂಪ್ಯೂಟರ್ ಸಂಸ್ಕೃತಿ ಪರಿಚಯಿಸಿ, ಐಐಟಿಗಳ ಹೊರತಾಗಿ ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವಿ ನೀಡುವ ಕೆಲವೇ ಸಂಸ್ಥೆಗಳ ಸಾಲಿಗೆ ಎಎಂಯುವನ್ನು ಸೇರಿಸಿದರು. 2007-2012ರ ಅವಧಿಯಲ್ಲಿ ಬಹಳ ವಿವಾದ ಗಳನ್ನು ಸಷ್ಟಿಸಿದ ವಿಸಿ ಪ್ರೊ. ಪಿ.ಕೆ ಅಬ್ದುಲ್ ಅಜೀಜ್ ಕೂಡ, ಅಲಿಗಢದ ಹೊರಗೆ ಎಎಂಯು ಕೇಂದ್ರಗಳನ್ನು ಸ್ಥಾಪಿಸಿದರು. 1980-85ರ ಅವಧಿಗೆೆ ವಿಸಿ ಆಗಿದ್ದ ಐಎಎಸ್ ಅಧಿಕಾರಿ ಸಯ್ಯದ್ ಅಹ್ಮದ್, ವಿದ್ಯಾರ್ಥಿ ಪ್ರತಿಭಟನೆ ಹತ್ತಿಕ್ಕಲು ಪೊಲೀಸರನ್ನು ಕರೆಸುವ ಪದ್ಧತಿ ಆರಂಭಿಸಿದರು. ಜಾಮಿಯಾ ಪ್ರಕರಣದಲ್ಲೂ ಅಷ್ಟೆ- ಪ್ರೊ. ಮುಷಿರುಲ್ ಹಸನ್ ವಿಸಿಯಾಗಿದ್ದಾಗ ದಶಕದ ಲೋಪದ ಬಳಿಕ ವಿದ್ಯಾರ್ಥಿ ಮಂಡಳಿಗೆ ಚುನಾವಣೆ ನಡೆಸಿದರು.

ಅಷ್ಟೇ ಅಲ್ಲದೆ, ಹೊಸ ಪದ್ಧತಿಯು- ಕೋರ್ಟಿನ ಪ್ರಭಾವಿ ಗುಂಪಿನ ನಾಯಕರ ಜತೆ ವ್ಯವಹರಿಸಲು ಅಗತ್ಯವಿದ್ದ ಎಎಂಯು ಕುಲಪತಿಯ ನೈತಿಕ ಅಧಿಕಾರವನ್ನು ಮೊಟಕುಗೊಳಿಸಿತು. ಈ ಪದ್ಧತಿಯು ಎಎಂಯುವನ್ನು ಆಧುನಿಕ ಶಿಕ್ಷಣದ ಬಗ್ಗೆ ಮಬ್ಬಾದ ಕಲ್ಪನೆ ಹೊಂದಿದ, ಕೆಲವೊಮ್ಮೆ ಸುಧಾರಣಾವಾದಿಗಳಂತೆ ತೋರುವ ಸುನ್ನಿ ಪಂಗಡದ ನಾಯಕರ ಆಡುಂಬೊಲವಾಗಿಸಿತು. ಹೀಗೆ ವಿಸಿ ಹುದ್ದೆಯು ಹಿಂದೂ ಪ್ರೊಫೆಸರ್‌ಗಳ, ಶಿಯಾಗಳ, ಎಡಪಂಥೀಯರ ಮತ್ತು ನಾಸ್ತಿಕವಾದಿಗಳ ತಲೆ ಎಣಿಸುವ ಕೆಲಸ ಮಾಡಲಾರಂಭಿಸಿತು. ಇನ್ನು ಮಹಿಳೆಯರ ಪಾಡು? 1981ರ ತಿದ್ದುಪಡಿಯ ಬಳಿಕ ಇಸ್ಲಾಮಿಕ್ ಹಕ್ಕುಗಳ ಪ್ರಬಲ ಪ್ರತಿಪಾದಕನಾಗಿ ಎಎಂಯು ಬದಲಾಯಿತು. ಅದೇನೇ ಇದ್ದರೂ, ಎಎಂಯುನ ಕಳಂಕಿತ ಪದ್ಧತಿಯು ಸರಕಾರದ ತೆರೆಮರೆ ಆಟದಿಂದ ಮುಕ್ತಿ ದೊರಕಿಸಲಾರದು. ಉದಾ: ಜಾಮಿಯಾ ಶೋಧ ಸಮಿತಿಯ ಇದೇ ವ್ಯವಸ್ಥೆಯನ್ನು ಅನುಸರಿಸುತ್ತದೆ. ಕೇಂದ್ರೀಯ ವಿವಿಯಾಗಿ ಕಳೆದ 24 ವರ್ಷಗಳಲ್ಲಿ ಅದರ ಶೇ. 50ಕ್ಕೂ ಹೆಚ್ಚು ವಿಸಿಗಳು ಶೈಕ್ಷಣಿಕೇತರ ವಲಯದವರು. ಹಸ್ತಕ್ಷೇಪ ನಡೆಸುವ ಸರಕಾರದ ಅಧಿಕಾರ ಮತ್ತು ಅದರ ತಾಳಕ್ಕೆ ತಕ್ಕಂತೆ ಕುಣಿಯುವ ಮುಸ್ಲಿಂ ಶಿಕ್ಷಣ ತಜ್ಞರ ದೌರ್ಬಲ್ಯವನ್ನು ಇದು ತೋರಿಸುತ್ತದೆ. ಎಎಂಯುನ ದುರಂತ ಇದಕ್ಕಿಂತಲೂ ದೊಡ್ಡದು. ಏಕೆಂದರೆ, ತನ್ನ ಕುಲಪತಿಯನ್ನೇ ತಾನೇ ಆರಿಸಿಕೊಂಡಿದೆ ಎಂಬ ನಂಬಿಕೆಯಿಂದ ಅದರ ಬಾಯಿ ಮುಚ್ಚಿಸಲಾಗುತ್ತದೆ. ರಾಜಕೀಯ ಪ್ರಜ್ಞೆಯುಳ್ಳ ಎಎಂಯು ಮೇಲೆ ತೆರೆಮರೆಯಿಂದ ತನ್ನ ಉದ್ದೇಶ ಗಳನ್ನು ಹೇರುವ ಸರಕಾರದ ನೀತಿಗೆ ಇದು ಉತ್ತಮ ದಾಹರಣೆ. ಸಮುದಾಯದ ಕೆಲ ಸಂಪ್ರದಾಯವಾದಿ ನಾಯಕರು ತೆರೆಮರೆ ಯ ಸವಲತ್ತುಗಳಿಗಾಗಿ ಸರಕಾರದ ತಾಳಕ್ಕೆ ಕುಣಿಯುತ್ತಾರೆ.

ಎಎಂಯು ಮತ್ತು ಜಾಮಿಯಾಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು: ಇತ್ತೀಚಿನ ದಶಕಗಳಲ್ಲಿ ದಿಲ್ಲಿ ಯೂನಿರ್ಸಿಟಿ, ಬನಾರಸ್ ಹಿಂದೂ ಯೂನಿವರ್ಸಿಟಿ, ವಿಶ್ವಭಾರತಿ ಅಥವಾ ಜೆಎನ್‌ಯುಗಳಿಗೆ ಏಕೆ ಐಎಎಸ್ ಅಥವಾ ಜನರಲ್‌ಗಳನ್ನು ಕುಲಪತಿಯಾಗಿ ನೇಮಿಸುತ್ತಿಲ್ಲ? ಅವರ ಆತ್ಮಾವಲೋಕನ ತಮ್ಮ ಪಾಡನ್ನು ಅರ್ಥಮಾಡಿ ಕೊಳ್ಳಲು ನೆರವಾಗಬಹುದು ಎಂದು ಆಶಿಸೋಣ. ಏಕೆಂದರೆ, ಶಿಕ್ಷಣ ಕುರಿತಾದ ಅವರ ಸಮುದಾಯದ ನಾಯಕರ ಕಲ್ಪನೆಗಳು 21ನೇ ಶತಮಾನಕ್ಕೆ ತಕ್ಕುದಾಗಿಲ್ಲ.

Courtesy: Vijaya Karnataka, April 26, 2013


 

 

 

 

Copyright © 2013 amuct.org. All Rights Reserved | Powered by eCreators
Home | News | Sitemap | Contact

OFFICE:
AMUCT, I Floor, Nithyananda Complex,
A.S.R.P. Road,
Near Nava Bharath Circle,
Kodialbail, Mangalore- 575 003

 

E-Mail: This email address is being protected from spambots. You need JavaScript enabled to view it.
E-Mail: This email address is being protected from spambots. You need JavaScript enabled to view it.