ಮಂಗಳೂರು, ಜೂನ್ 9,
ಅಮುಕ್ತ್ ನ ಈಗಿನ ಹಾಗೂ ನಿಕಟಪೂರ್ವ ಪದಾಧಿಕಾರಿಗಳ ನಿಯೋಗವು ಕರ್ನಾಟಕ ಸರಕಾರದ ಆರೋಗ್ಯ ಮಂತ್ರಿಯಾದ ಶ್ರೀ ಯು. ಟಿ. ಖಾದರ್ ರವರನ್ನು ಭೇಟಿ ಮಾಡಿತು. ಜೂನ್ 30 ರಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಡೆಯುವ ಅಮುಕ್ತ್ ನ ಶೈಕ್ಷಣಿಕ ಸಮಾವೇಶದಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವಂತೆ ವಿನಂತಿಸಲಾಯಿತು. ಆರೋಗ್ಯ ಸಚಿವರು ತಮ್ಮ ಸಹಮತಿಯನ್ನು ವ್ಯಕ್ತಪಡಿಸಿದರು.

 


ಅಮುಕ್ತ್ ನ ಅಧ್ಯಕ್ಷರಾದ ಡಾ. ನೋರ್ಬರ್ಟ್ ಲೋಬೊ, ಕಾರ್ಯದರ್ಶಿ, ಪುರುಷೋತ್ತಮ ಕೆ. ವಿ., ಮಾಜಿ ಅಧ್ಯಕ್ಷರುಗಳಾದ ಡಾ. ಎ.ಎಮ್. ನರಹರಿ, ಉಮ್ಮಪ್ಪ ಪೂಜಾರಿ, ಹಾಗೂ ಅಮುಕ್ತ್ ಬುಲೆಟಿನ್ ನ ಸಂಪಾದಕರಾದ ಡಾ. ಡೆನಿಸ್ ಫೆರ್ನಾಂಡಿಸ್ ರವರು ಈ ನಿಯೋಗದಲ್ಲಿದ್ದರು.