ಕಾಲೇಜು ಶಿಕ್ಷಣ ಇಲಾಖೆಯು ದಿನಾಂಕ 26 ಹಾಗೂ 27 ನೇ ಸಪ್ತಂಬರ 2017 ರಂದು ಮಂಗಳೂರು ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ ವ್ಯಾಪ್ತಿಗೊಳಪಡುವ ಅನುದಾನಿತ ಹಾಗೂ ಸರಕಾರಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭೋದಕ/ಭೋದಕೇತರ ಸಿಬ್ಬಂದಿಗಳ ಸೇವಾ ವಿಷಯಗಳ ಕುರಿತು ನಿಯಮಾನುಸಾರ ಪರಿಶೀಲಿಸಿ ಇತ್ಯರ್ಥ ಪಡಿಸುವ ಸಂಬಂಧ ಅದಾಲತ್ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿರುವ ಬಗ್ಗೆ ಈಗಾಗಲೇ ಸುತ್ತೋಲೆಯನ್ನು ಹೊರಡಿಸಿರುತ್ತಾರೆ. ಈ ಸಂಬಂಧ ನಮ್ಮ ಸದಸ್ಯರುಗಳ ಇತ್ಯರ್ಥವಾಗದೇ ಬಾಕಿ ಉಳಿದಿರುವ ಬಡ್ತಿ, ಎಜಿಪಿ ಸ್ಥಾನೀಕರಣ, ಪಿ ಎಚ್ ಡಿ ಇನ್ಕ್ರಿಮೆಂಟ್ ಮುಂತಾದ ಪ್ರಕರಣಗಳನ್ನು ಇಲಾಖೆಯ ಸಂಬಂಧಪಟ್ಟವರ ಗಮನಕ್ಕೆ ತರುವರೇ (ಅಮುಕ್ತ್ ಸದಸ್ಯರುಗಳಿಂದ ಮಾತ್ರ) ತುರ್ತು ಮಾಹಿತಿಯ ಅಗತ್ಯವಿದೆ. ದಯವಿಟ್ಟು ನಮ್ಮ Website: www.amuct.org ನಲ್ಲಿ ಕೊಟ್ಟಿರುವ Format ನಲ್ಲಿ ಮಾಹಿತಿಯನ್ನು ಸರಿಯಾಗಿ ಹಾಗೂ ಸ್ಪಷ್ಟವಾಗಿ This email address is being protected from spambots. You need JavaScript enabled to view it. ಗೆ 20.9.2017ರೊಳಗಾಗಿ ತಪ್ಪದೆ ಕಳುಹಿಸಿಕೊಡಬೇಕಾಗಿ ವಿನಂತಿ.
ಒಂದು ಕಾಲೇಜಿನ ಎಲ್ಲರ ಮಾಹಿತಿಯನ್ನು ಅಮುಕ್ತ್ ಕನ್ವೀನರುಗಳು ಒಂದೇ ಪತ್ರದಲ್ಲಿ ಕಳುಹಿಸಿ ಕೊಡಿ, ವ್ಯಕ್ತಿಗತವಾಗಿ ಕಳುಹಿಸುವುದು ಬೇಡ.
ದಯವಿಟ್ಟು whatsApp/ Mobile SMS ಮೂಲಕ ಮಾಹಿತಿಯನ್ನು ಕಳುಹಿಸುವುದು ಬೇಡ.
9448251230 ಗೆ ಮೈಲ್ ಮಾಡಿದ ವಿಚಾರವನ್ನು SMS ಕಳುಹಿಸಿದರೆ ಉತ್ತಮ.
ವಂದನೆಗಳೊಂದಿಗೆ,
Dr. Ummappa Poojary P
President, AMUCT

Click here for ADALAT FORMAT